ಬರಡು ಭೂಮಿಯಲ್ಲಿ ಸಾಗುವ ಛಲವೊಂದಿದೆ, ಮನದಲ್ಲಿರೋ ನೆನಪೆಲ್ಲ ನೆಪ ಹೇಳಿ ಕುಳಿತಿದೆ; ಸಾಧನೆಯ ಮೆಟ್ಟಿಲು ಹತ್ತಿರವಿದ್ದರೂ ದೂರವಿದ್ದಂತೆ ಕಾಣುತಿದೆ, ಈ ಒಂಟಿ ಜೀವವೂ ಎಡಬಎಡೆಬಿ ಹೆಜ್ಜೆ ಹಾಕುತಿದೆ. - ಸ್ಫೂರ್ತಿ
ಕ್ಷಣಕ್ಷಣವು ಸ್ಥಾಪಿಸಿದೆವು ಸ್ನೇಹದ ಮಂದಿರ, ಸುಖ-ದುಃಖ ನೆನಪುಗಳೇ ಇದರ ಆಗರ; ನಮ್ಮಿಬ್ಬರ ಗೆಳೆತನದ ನಡುವೆ ಬಾರದಿರಲಿ ಅಂತರ, ಈ ಮೈತ್ರಿಯ ಪದಗಳಿಗೆ ನೀನಾದೆ ಪ್ರೀತಿಯ ಇಂಚರ. - ಸ್ಫೂರ್ತಿ
ಸಹ್ಯಾದ್ರಿ ತಪ್ಪಲಿನ ಮಲೆನಾಡು, ಪವಿತ್ರ ತುಂಗೆ ಹರಿವಳು ನೋಡು; ವೇದ-ವ್ಯಾಸರು ನೆಲೆಸಿರುವ ಬೀಡು, ಅದ್ವೈತ ಸಿದ್ಧಾಂತ ಸಾರಿದ ನಾಡು; ತಾಯಿ ಶಾರದೆಯ ಮುಂದೆ ವಿದ್ಯೆಯ ಬೇಡು. - ಸ್ಫೂರ್ತಿ