Friday, November 2, 2018

ಕನ್ನಡ ರಾಜ್ಯೋತ್ಸವದ ರಣಕಹಳೆ...

ಇಂದಿನ ಕನ್ನಡದ ಪ್ರೀತಿ ತೋರಿದರೆ ಪ್ರತಿದಿನ,
ಸ್ಫುರಿಸುವುದು ಕನ್ನಡ ಸಾಹಿತ್ಯದ ಸಂಚಲನ;
ಘರ್ಜಿಸುವುದು ಕನ್ನಡದ ರಣಕಹಳೆಯ ಗಾನ,
ದಿನಂಪ್ರತಿ ಆಚರಿಸುವೆವು ಕನ್ನಡ ರಾಜ್ಯೋತ್ಸವದ ಶುಭದಿನ .
                                     - ಸ್ಫೂರ್ತಿ

ಕನ್ನಡ ರಾಜ್ಯೋತ್ಸವದ ಶುಭಾಶಯಗಳು...

ನೆಲೆಸಿರುವ ಭೂದೇವಿಯ ಮಡಿಲಲ್ಲಿ,
ಗಂಗೆ,ತುಂಗೆ,ಕಾವೇರಿ,ಕೃಷ್ಣೆ ಹರಿವರಿಲ್ಲಿ;
ರನ್ನ,ಪೊನ್ನ, ದಾಸರು ತಂಗಿದ್ದರಿಲ್ಲಿ,
ಹಿಂದೂ,ಕ್ರೈಸ್ತ,ಮುಸಲ್ಮಾನ ಜೈನರಿರುವರಿಲ್ಲಿ;
ಕರುನಾಡ ಕಣ್ಮಣಿ ಆಗು ನೀ ಇಲ್ಲಿ.
  
ಗಂಗ ಕದಂಬ ಚಾಲುಕ್ಯ ಹೋರಡಿದರಿಲ್ಲಿ,
ಅಕ್ಕಮ್ಮ ಓಬವ್ವ ರಾಯಣ್ಣರ ಆತ್ಮವಿರುವುದಿಲ್ಲಿ;
ಬೇಲೂರು ಹಂಪಿಯ ಶಿಲ ಸ್ಥಾವರವಿರುವುದಿಲ್ಲಿ,
ಪುಟ್ಟಪ್ಪ ಕಣವಿಯರ ಕೃತಿ ಅರಳುವುದಿಲ್ಲಿ,
ಅಮರವಾಗು ನೀ ಈ ನಾಡಿನಲ್ಲಿ.
                                       - ಸ್ಫೂರ್ತಿ





ಕನ್ನಡ ಕಸ್ತೂರಿ...

ಕನ್ನಡ ನಾಡಿನ ನೆಲ ಜಲ ನಿನಗೆ ಉಸಿರಾಯಿತು,
ಕೆಲಸ ಮಾಡಲು ಆಂಗ್ಲ ಭಾಷೆ ನಿನ್ ಉಸಿರಾಯಿತು;
ನಾಡಿನ ಅಭಿಮಾನ ನಿನ್ನಿಂದ ಮರೆಯಾಯಿತು,
ಕನ್ನಡವೇ ನಿನ್ ಹೆಸರಿಗೆ ಆಸರೆಯಾಯಿತು.
                                    - ಸ್ಫೂರ್ತಿ

ಛಲಬಿಡದ ಪಯಣ...

ಬರಡು ಭೂಮಿಯಲ್ಲಿ ಸಾಗುವ ಛಲವೊಂದಿದೆ,
ಮನದಲ್ಲಿರೋ ನೆನಪೆಲ್ಲ ನೆಪ ಹೇಳಿ ಕುಳಿತಿದೆ;
ಸಾಧನೆಯ ಮೆಟ್ಟಿಲು ಹತ್ತಿರವಿದ್ದರೂ ದೂರವಿದ್ದಂತೆ ಕಾಣುತಿದೆ,
ಈ ಒಂಟಿ ಜೀವವೂ ಎಡಬಎಡೆಬಿ ಹೆಜ್ಜೆ ಹಾಕುತಿದೆ.
                                       - ಸ್ಫೂರ್ತಿ

ಬದುಕು ಮೂರು ದಿನಗಳ ಆಟ....

ಬದುಕೆಂಬ ಮೂರು ದಿನಗಳ ಆಟದಿ,
ಎಲ್ಲವನ್ನೂ ಪಡೆವೆನೆಂಬ ಹಠದಿ;
ಮಿತಿಯೇ ಇಲ್ಲ ಆತನ ಆಸೆಗಳಿಗೆ,
ಆದರೂ ಬೆತ್ತಲಾಗಿ ಹೋಗುವನು ಮಸಣದ ಕಡೆಗೆ.
                              ಸ್ಫೂರ್ತಿ

ರೋಮಾಂಚನ ಈ ಕನ್ನಡ..

ಪದಪುಂಜದ ಮಿಡಿತ ಕನ್ನಡ,
ಕವಿಗಳ ನರನಾಡಿ ಕನ್ನಡ;
ಕವಿತೆಗಳ ಸಾರಾಂಶ ಕನ್ನಡ,
ಕಲಾಭಿಮಾನಿಗಳ ರಸದೌತಣ ಕನ್ನಡ.
                               - ಸ್ಫೂರ್ತಿ

ಕೆಲವು ದಿನಗಳ ನೆನಪು..

ನೆನಪಿನ ಸಾಗರದಲ್ಲಿ ಮುಳುಗಿದ್ದೇನೆ,
ಎದ್ದೇಳಲು ಒದ್ದಾಡುತ್ತಿದ್ದೇನೆ;
ಗೆಲುವಿನ ಪಥ ಬೇಕಿದೆ,
ಜಯದ ಹಾದಿಗೆ ಮನ ಕಾದಿದೆ.
                              - ಸ್ಫೂರ್ತಿ

ಅಹಂ ಎಂಬ ಗರ್ವ....

ಅಹಂಕಾರವೆಂಬ ವಿಷವ ಸೇವಿಸಿ,
ಅಂತರಾತ್ಮವನ್ನು ಸುಟ್ಟು ಭಸ್ಮ ಮಾಡಿ;
ಬಣ್ಣ ಬಣ್ಣದ ಮುಖವಾಡ ಧರಿಸಿ,
ತಾನೇ ಶ್ರೇಷ್ಠವೆಂದು ಘರ್ಜಿಸುವವರ ನೋಡಿ.
                                    - ಸ್ಫೂರ್ತಿ

ಆ ನಿಷ್ಕಲ್ಮಶ ಸ್ನೇಹ...

ಕ್ಷಣಕ್ಷಣವು ಸ್ಥಾಪಿಸಿದೆವು ಸ್ನೇಹದ ಮಂದಿರ,
ಸುಖ-ದುಃಖ ನೆನಪುಗಳೇ ಇದರ ಆಗರ;
ನಮ್ಮಿಬ್ಬರ ಗೆಳೆತನದ ನಡುವೆ ಬಾರದಿರಲಿ ಅಂತರ,
ಈ ಮೈತ್ರಿಯ ಪದಗಳಿಗೆ ನೀನಾದೆ ಪ್ರೀತಿಯ ಇಂಚರ. 
                                     - ಸ್ಫೂರ್ತಿ

ಆ ನಗುವ ಹಿಂದಿರುವ ನೋವು

ಆ ನಗುವ ಹಿಂದಿರುವ ನೋವು,
ವರ್ಣಿಸಲಾಗದು ಅದರ ಭಾವನೆ;
ಮನದಲ್ಲಿ ಮೂಡಿತು ಜ್ಞಾನದ ಸಂವೇದನೆ,
ಬದುಕು ತೋರಿತು ಶಾಂತಿಯ ಪರಿವರ್ತನೆ.
                                  - ಸ್ಫೂರ್ತಿ

ಭಕ್ತಿಯ ಪರಾಕಾಷ್ಟೆಯ ನಾಡು.

ಸಹ್ಯಾದ್ರಿ ತಪ್ಪಲಿನ ಮಲೆನಾಡು,
ಪವಿತ್ರ ತುಂಗೆ ಹರಿವಳು ನೋಡು;
ವೇದ-ವ್ಯಾಸರು ನೆಲೆಸಿರುವ ಬೀಡು,
ಅದ್ವೈತ ಸಿದ್ಧಾಂತ ಸಾರಿದ ನಾಡು;
ತಾಯಿ ಶಾರದೆಯ ಮುಂದೆ ವಿದ್ಯೆಯ ಬೇಡು.
                                          - ಸ್ಫೂರ್ತಿ

ಶಾಂತಿಯ ಮಾತು...

ಉದಯವಾಯಿತು ಬೆಳಕಿನ ಕಾಂತಿ,
ಮುದ ನೀಡಿತು ಮನಸ್ಸಿಗೆ ಶಾಂತಿ;
ಹಬ್ಬಿತು ಎಲ್ಲರಿಗೂ ದೀಪದ ಶಕ್ತಿ,
ಆತ್ಮಕ್ಕೆ ದೊರಕಿತು ಜ್ಞಾನದ ಮುಕ್ತಿ.
                                   - ಸ್ಫೂರ್ತಿ