Friday, February 1, 2019

ಶಾಯಿಯ ಬೆಂಬಲ

ಹೃದಯದಲ್ಲಿ ನಿನ್ನ ಹೆಸರನು ಉಲ್ಲೇಖಿಸಲು,
ಬೇಕಾಗಿದೆ ನನಗೆ ಶಾಯಿಯ ಬೆಂಬಲ;
ಅಂತಃಕರಣದಲ್ಲಿ ನಿನ್ನ ನೆನಪನು ನೆನೆಯಲು,
ಭಾವಪರವಶವಾದ ಈ ಮನಸ್ಸ ಹಂಬಲ. 

ಮೌನರಾಗ


ಆಲೋಚನೆಗಳಲ್ಲಿ ತೊಡಗಿದೆ ಈ ಅಂತರಂಗ,
ದ್ಗಿಭ್ರಾಂತಿಯ ಸರಪಳಿಯಲ್ಲಿ ಸಿಲುಕಿದೆ ಬಹಿರಂಗ;
ವಿನೋದ ಭಾವಕ್ಕೆ ವಿರಾಮದ ಕೆಲಸ ಇಂದು ಸರಾಗ;
ದುಃಖತಪ್ತ ಮನದಲ್ಲಿ ಕೇಳುತ್ತಿದೆ ಗುಂಗಿನ ಮೌನರಾಗ.,

ಜಲಧಾರೆ

ಭೋರ್ಗರೆಯುತ್ತಾ ಹರಿಯುತ್ತಿದೆ ಜಲಧಾರೆ,
ಅದರ ರಭಸಕ್ಕೆ ಮಿನುಗುತ್ತಿತ್ತು ಆ ಸೂರ್ಯ ಎಂಬ ತಾರೆ;
ಅದ ಮೈದುಂಬಿ ಕೊಳ್ಳಲು ಬಂದೆನು ನಾ ಮನಸಾರೆ,
ಜಲಧಾರೆಯ ಸೊಬಗಿಗೆ ಮನದ ನೋವುಗಳು ಕಣ್ಮರೆ.
                               

ಅಲೆಮಾರಿ

ಬದುಕಿನ ಬವಣೆಯು ತೊಲಗಬೇಕೆಂದು,
ಹಗಲಿರುಳು ನಡೆದೆ ದಾರಿ ಸಿಗುವುದೆಂದು;
ಅನ್ನವನು ಹುಡುಕಿದೆ ಹಸಿವನು ನೀಗಿಸಲೆಂದು,
ಮುಂದುವರಿಸುತ ಸಾಗಿದೆ ನಾನು ಅಲೆಮಾರಿ ಎಂದು.

ದೇವದೂತನಿಗೆ ನಮನ

*ದೇವದೂತನಿಗೆ ನಮನ*
ಶಿವನ ವಿಭೂತಿಯನು ದೇಹಕ್ಕೆ ಧರಿಸಿ,
ಇಷ್ಟಲಿಂಗವನು ಭಕ್ತಯಿಂದ ಪೂಜಿಸಿ;
ಆನಂದ,ಆಸೆ,ಆಕಾಂಕ್ಷೆಗಳನ್ನು ತ್ಯಜಿಸಿ,
ಗುರು,ಲಿಂಗ,ಜಂಗಮವನ್ನು ಸದಾ ಸ್ಮರಿಸಿ;
ಕಾಯಕವೇ ಕೈಲಾಸ ಎಂಬ ತತ್ವವನನುಸರಿಸಿ,
ತ್ರಿವಿಧ ದಾಸೋಹವನ್ನು ದಿನಂಪ್ರತಿ ಪಸರಿಸಿ;
ಸಂಸ್ಕಾರ,ಸಂಸ್ಕೃತಿ ಎಂಬ ಜ್ಞಾನದ ಬೆಳಕನ್ನು ಬೆಳಗಿಸಿ;
ಮೇಲುಕೀಳು,ಮಡಿ‌-ಮೈಲಿಗೆ ಎಂಬುದನು ಮರೆಸಿ,
ಎಲ್ಲಾ ನನ್ನವರೇ ಎಂಬ ಕರುಣೆಯನು ತೋರಿಸಿ;
ತನ್ನೆಲ್ಲಾ ಲೋಕಕಲ್ಯಾಣದ ಕೆಲಸವನ್ನು ಮುಗಿಸಿ,
ಆ ದೇವನು ಈ ದೇವರ ಭೇಟಿಗೆನೋ ಕರೆಸಿ;
ಭಕ್ತಶರಣರಲ್ಲಿ ಅನಾಥ ಭಾವವ ಮೂಡಿಸಿ,
ಭರಿಸಿಲಾಗದ ದುಃಖದಲ್ಲಿ ದೇವರನ್ನು ಬೀಳ್ಕೊಡುಗಿಸಿ;
ಇಂಥಹ ಸಿದ್ದಿಶ್ರೇಷ್ಠರ ಚರಣಾರವಿಂದಕ್ಕೆ ವಂದಿಸಿ,
ಮತ್ತೆ ನಿಮ್ಮ ಹಾದಿಯನು ಕಾಯುವೆವು ಎಂದು ಪ್ರಾರ್ಥಿಸಿ;
ಶಿವಯೋಗಿಯ ಹಿತನುಡಿಗಳನ್ನು ನಾವೆಲ್ಲರೂ ಪಾಲಿಸಿಸೋಣ.