*ದೇವದೂತನಿಗೆ ನಮನ*
ಶಿವನ ವಿಭೂತಿಯನು ದೇಹಕ್ಕೆ ಧರಿಸಿ,
ಇಷ್ಟಲಿಂಗವನು ಭಕ್ತಯಿಂದ ಪೂಜಿಸಿ;
ಆನಂದ,ಆಸೆ,ಆಕಾಂಕ್ಷೆಗಳನ್ನು ತ್ಯಜಿಸಿ,
ಗುರು,ಲಿಂಗ,ಜಂಗಮವನ್ನು ಸದಾ ಸ್ಮರಿಸಿ;
ಕಾಯಕವೇ ಕೈಲಾಸ ಎಂಬ ತತ್ವವನನುಸರಿಸಿ,
ತ್ರಿವಿಧ ದಾಸೋಹವನ್ನು ದಿನಂಪ್ರತಿ ಪಸರಿಸಿ;
ಸಂಸ್ಕಾರ,ಸಂಸ್ಕೃತಿ ಎಂಬ ಜ್ಞಾನದ ಬೆಳಕನ್ನು ಬೆಳಗಿಸಿ;
ಮೇಲುಕೀಳು,ಮಡಿ-ಮೈಲಿಗೆ ಎಂಬುದನು ಮರೆಸಿ,
ಎಲ್ಲಾ ನನ್ನವರೇ ಎಂಬ ಕರುಣೆಯನು ತೋರಿಸಿ;
ತನ್ನೆಲ್ಲಾ ಲೋಕಕಲ್ಯಾಣದ ಕೆಲಸವನ್ನು ಮುಗಿಸಿ,
ಆ ದೇವನು ಈ ದೇವರ ಭೇಟಿಗೆನೋ ಕರೆಸಿ;
ಭಕ್ತಶರಣರಲ್ಲಿ ಅನಾಥ ಭಾವವ ಮೂಡಿಸಿ,
ಭರಿಸಿಲಾಗದ ದುಃಖದಲ್ಲಿ ದೇವರನ್ನು ಬೀಳ್ಕೊಡುಗಿಸಿ;
ಇಂಥಹ ಸಿದ್ದಿಶ್ರೇಷ್ಠರ ಚರಣಾರವಿಂದಕ್ಕೆ ವಂದಿಸಿ,
ಮತ್ತೆ ನಿಮ್ಮ ಹಾದಿಯನು ಕಾಯುವೆವು ಎಂದು ಪ್ರಾರ್ಥಿಸಿ;
ಶಿವಯೋಗಿಯ ಹಿತನುಡಿಗಳನ್ನು ನಾವೆಲ್ಲರೂ ಪಾಲಿಸಿಸೋಣ.